Slide
Slide
Slide
previous arrow
next arrow

ʼಗೀತಾ ಪ್ರೆಸ್‌ʼಗೆ 2021ರ ಗಾಂಧಿ ಶಾಂತಿ ಪುರಸ್ಕಾರ: ನಗದು ಸ್ವೀಕರಿಸದಿರಲು ಸಂಸ್ಥೆಯ ನಿರ್ಧಾರ

300x250 AD

ನವದೆಹಲಿ: 1 ಕೋಟಿ ರೂಪಾಯಿ ನಗದು ಬಹುಮಾನವನ್ನು ಒಳಗೊಂಡ 2021 ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ವಿಶ್ವದ ಅತಿದೊಡ್ಡ ಪ್ರಕಾಶಕರಲ್ಲಿ ಒಂದಾದ ಗೋರಖ್‌ಪುರದ ಗೀತಾ ಪ್ರೆಸ್‌ಗೆ ಘೋಷಿಸಲಾಗಿದೆ. ಆದರೆ ಗೀತಾ ಪ್ರೆಸ್‌ ಕೇವಲ ಸ್ಮರಣಿಕೆಯನ್ನು ಮಾತ್ರ ಸ್ವೀಕರಿಸುತ್ತೇವೆ, ನಗದು ಮೊತ್ತವನ್ನು ಸ್ವೀಕರಿಸುವುದಿಲ್ಲ ಎಂದು ಇಂದು ಹೇಳಿದೆ.

ಪ್ರಧಾನಿ ಮೋದಿ ನೇತೃತ್ವದ ತೀರ್ಪುಗಾರರ ಸಮಿತಿಯು ಭಾನುವಾರ ಗೀತಾ ಪ್ರೆಸ್ ಅನ್ನು ಪ್ರಶಸ್ತಿಗೆ ಭಾಜನರಾಗಿ ಆಯ್ಕೆ ಮಾಡಲು ಸರ್ವಾನುಮತದಿಂದ ನಿರ್ಧರಿಸಿತು.

“2021 ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ಪಡೆದಿರುವ ಗೀತಾ ಪ್ರೆಸ್, ಗೋರಖ್‌ಪುರವನ್ನು ನಾನು ಅಭಿನಂದಿಸುತ್ತೇನೆ. ಅವರು ಕಳೆದ 100 ವರ್ಷಗಳಲ್ಲಿ ಜನರಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನೆಗಳನ್ನು ಹೆಚ್ಚಿಸಲು ಶ್ಲಾಘನೀಯ ಕೆಲಸ ಮಾಡಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಟ್ವೀಟ್ ಕೂಡ ಮಾಡಿದ್ದರು.

300x250 AD

ಇಂದು ಪ್ರಕಾಶಕರು ಸ್ಮರಣಿಕೆ ಮಾತ್ರ ಸ್ವೀಕರಿಸುವುದಾಗಿ ಹೇಳಿದರು, ಸರ್ಕಾರವು ನಗದು ಬಹುಮಾನದ ಮೊತ್ತವನ್ನು ಬೇರೆ ಉದ್ದೇಶಕ್ಕೆ ಖರ್ಚು ಮಾಡಬೇಕೆಂದು ಸೂಚಿಸಿದೆ.

ಈ ವರ್ಷ ಈ ಸಂಸ್ಥೆ ತನ್ನ ಶತಮಾನೋತ್ಸವವನ್ನು ಆಚರಿಸುತ್ತಿದೆ.

Share This
300x250 AD
300x250 AD
300x250 AD
Back to top